ದುರ್ಗಪರಮೇಶ್ವರಿ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಪಕ ಜೆ ನಾರಾಯಣ ಅವರು ದುರ್ಗ ಪರಮೇಶ್ವರಿ ದೇವಸ್ಥಾನ, ವಿದ್ಯಾರಣ್ಯಪುರದಲ್ಲಿ ಮುಹೂರ್ತ ಆಚರಿಸಿಕೊಂಡಿರುವ ‘ಜಾನಕಿರಮ್’ ಕನ್ನಡ ಸಿನಿಮಾ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟ ಆಗಿರುವ ಯೋಗೀಶ್ ಅವರ ಪ್ರೀತಿ, ಪ್ರೇಮದ ಜೊತೆ ಸಾಹಸ ಸಹ ಒಳಗೊಂಡಿರುವ ಚಿತ್ರ.
ಗ್ರಾಮೀಣ ಪರಿಸರದಲ್ಲಿ ವ್ಯಾಪಾರದಲ್ಲಿ ತೊಡಗಿರುವ ನಾಯಕ ಪ್ರೀತಿಯಲ್ಲಿ ಧುಮುಕಿದಾಗ ಆಗುವ ಘಟನೆಗಳನ್ನು ಕುತೂಹಲಕಾರಿಯಾಗಿ ಕಟ್ಟಿದ್ದಾರೆ ಪ್ರಥಮ ನಿರ್ದೇಶನದಲ್ಲಿ ಎಸ್ ಕೆ ಸಂತೋಷ್. ಇವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಸಹ ರಚಿಸಿದ್ದಾರೆ. ಜನಪ್ರಿಯ ನಿರ್ದೇಶಕ ಎ ಪಿ ಅರ್ಜುನ್ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಗುಲ್ಬರ್ಗಾ ಮೂಲದ ಸಂತೋಷ್ ಹೊಂದಿದ್ದಾರೆ. ಬೆಂಗಳೂರು, ಕೊಳ್ಳೇಗಾಲ ಚಿತ್ರೀಕರಣ ನಡೆಯುವ ಸ್ಥಳಗಳು.
ಬಹಳ ವರ್ಷಗಳ ಬಳಿಕ ಕನ್ನಡಕ್ಕೆ ಆರ್ ಪಿ ಪಟ್ನಾಯಕ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಎ ಪಿ ಅರ್ಜುನ್, ಬಹದ್ದೂರ್ ಚೇತನ್ ಗೀತ ಸಾಹಿತ್ಯ ನಾಲ್ಕು ಹಾಡುಗಳಿಗೆ ಒದಗಿಸಿದ್ದಾರೆ.
ಯೋಗೀಶ್ ಅವರಿಗೆ ನಾಯಕಿಯ ಆಯ್ಕೆ ನಡೆಯುತ್ತಿದೆ. ರಂಗಾಯಣ ರಘು, ರವಿಶಂಕರ್, ತುಳಸಿ ಶಿವಮಣಿ, ಮೈಕೊ ನಾಗರಾಜ್ ಪೋಷಕ ಕಲಾವಿದರು.
ಸಭಾ ಕುಮಾರ್ ಅವರ ಛಾಯಾಗ್ರಹಣ, ದೀಪು ಎಸ್ ಕುಮಾರ್ ಅವರ ಸಂಕಲನ, ವಿಕ್ರಮ್ ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹಸ ಒಳಗೊಂಡಿರುವ ಈ ‘ಜಾನಕಿರಾಮ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಡಿಸೆಂಬರ್ 15 ರಿಂದ ಆರಂಭ.